ಪದ್ಯಾಣ ಗಣಪತಿ ಭಟ್ ರಿಗೆ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಆಗಸ್ಟ್ 2 , 2014
|
ಕರಾವಳಿ ಕರ್ನಾಟಕದ ಯಕ್ಷಗಾನ ಕ್ರೇತ್ರಕ್ಕೆ ಮೂಲದ ಜನಪದ ಆಯಾಮವನ್ನು ನೀಡಿದ ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ 2014ರ ಪ್ರಶಸ್ತಿಗೆ ಜನಪ್ರಿಯ ಭಾಗವತ ಪದ್ಯಾಣ ಗಣಪತಿ ಭಟ್ ರವರು ಆಯ್ಕೆಯಾಗಿದ್ದಾರೆ ಎಂದು ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ.ದಾಮೋದರ ನಿಸರ್ಗ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.31ರಂದು ಸಂಜೆ 7 ಗಂಟೆಗೆ ಮಂಗಳೂರು ಪುರಭವನದಲ್ಲಿ ದೋಗ್ರ ಪೂಜಾರಿಯವರ 34ನೇ ಸಂಸ್ಮರಣ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದ್ದು ರೂ. 10000 ನಗದಿನೊಂದಿಗೆ ನೀಡುವ ಪ್ರಶಸ್ತಿಯು ಹಿರಿಯರಾದ ಅಮೃತ ಸೋಮೇಶ್ವರರ ನೇತೃತ್ವದ ಸಮಿತಿಯ ಆಯ್ಕೆಯ ಮೂಲಕ ಕೊಡಲ್ಪಡುತ್ತದೆ.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಪಕರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಪ್ರಭಾಕರ ನೀರು ಮಾರ್ಗ, ನ್ಯಾಯವಾದಿ ಕೆ. ಮಹಾಬಲ ಶೆಟ್ಟಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ‘ಶಿವಭಕ್ತ ವೀರಮಣಿ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರತ್ನ ಕುಮಾರ್ , ರವಿ ಅಲೆವೂರಾಯ ವರ್ಕಾಡಿ, ಹೇಮಂತ್ ಉಪಸ್ಥಿತರಿದ್ದರು.
ಕೃಪೆ :
http://www.rnnlive.com
|
|
|